ಮಡಿಕೇರಿ: ಪ್ರೇಮಿಗಳ ದಿನಾಚರಣೆ ದಿನವೇ ಇಲ್ಲಿನ ಹಾರಂಗಿ ಜಲಾಶಯದ ಹಿನ್ನೀರಿಗೆ ಹಾರಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಚಿನ ಹಾಗೂ ಸಿಂಧು ಅನ್ನೋ ಪ್ರೇಮಿಗಳಿಬ್ಬರು ಸೂಸೈಡ್ ಮಾಡಿಕೊಂಡಿದ್ದಾರೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಸಚಿನ ಹಾಗೂ ಸಿಂಧು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವತಿ ಸಿಂಧುಗೆ ಬೇರೆ ಹುಡ್ಗನೊಂದಿಗೆ ಮದುವೆ ಫಿಕ್ಸ್ ಆಗಿತ್ತು. ಭಾನುವಾರವೇ ಮದುವೆ ಇತ್ತು. ಇಷ್ಟವಿಲ್ಲದ ಮದುವೆಯಿಂದ ಸಿಂಧು ಬೇಸತ್ತಿದ್ಳು. ಹೀಗಾಗಿ ಈ ಜೋಡಿ ಬೆಳಗ್ಗೆ ಬೈಕ್ ಮೇಲೆ ಬಂದು ಸುಮಾರು 2.30 ರ ಸುಮಾರಿಗೆ ಹಾರಂಗಿ ಜಲಾಶಯದ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆ ಸುಮಾರು 6 ಗಂಟೆಯ ನಂತರ ಮೃತದೇಹಗಳನ್ನ ಪತ್ತೆ ಮಾಡಲಾಗಿದೆ.