ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮೇಕೆದಾಟು ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರು ಮಾತನಾಡಿದ್ದರು. ಆಣೆಕಟ್ಟು ಕಟ್ಟಿದರೆ ಏನು ಸಮಸ್ಯೆಯಾಗುತ್ತೆ ಎಂದು ತಿಳಿಸಿದರು. ಇದೀಗ ಎರಡನೇ ಹಂತವಾಗಿ ದಿ ವಾಟರ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿ ರಾಜೇಂದ್ರ ಸಿಂಗ್ ಮಾತನಾಡಿದ್ದಾರೆ.
ನಟ ಹಾಗೂ ಸಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರೊಂದಿಗೆ ಮಾಧ್ಯಮಗೋಷ್ಠಿ ನಡೆಸಿ ಅವರು ಮಾತನಾಡಿದರು. ಇನ್ನು ನೀರಿನ ವಿಚಾರದಲ್ಲಿ ಮೂರು ಪಕ್ಷಗಳು ರಾಜಕೀಯ ಮಾಡುತ್ತೇವೆ ಎಂದು ಚೇತನ್ ವಾಗ್ದಾಳಿ ನಡೆಸಿದರು.
ಭಾವನಾತ್ಮಕ ವಿಚಾರ ಇಟ್ಟುಕೊಂಡು ರಾಜಕಾರಣಿಗಳು ಮೈಲೇಜ್ ತೆಗೆದುಕೊಳ್ಳುತ್ತಿದ್ದಾರೆ. ಮೇಕೆದಾಟು ಸಂಬಂಧ ಸಿಎಂ ಸರ್ವಪಕ್ಷ ಸಭೆ ಕರೆದಿದ್ದಾರೆ. ಅದಕ್ಕೆ ಪರಿಸರ ತಜ್ಞರು, ಸಾಮಾಜಿಕ ಹೋರಾಟಗಾರರನ್ನು ಕರೆಯಬೇಕು. ಆಣೆಕಟ್ಟು ಕಟ್ಟುವುದರಿಂದ ಎಷ್ಟೊಂದು ಸಮಸ್ಯೆಯಿದೆ ಅನ್ನೋದು ಚರ್ಚೆಯಾಗಬೇಕು ಎಂದರು.