ಪ್ರಜಾಸ್ತ್ರ ಸುದ್ದಿ
ಸಿಂದಗಿ: ನವರಾತ್ರಿ ಹಬ್ಬದ ಪ್ರಯುಕ್ತ ಮಾಧ್ಯಮರಂಗ ಫೌಂಡೇಶನ್ ವತಿಯಿಂದ ಸಿಂದಗಿ ಪಟ್ಟಣದ ಬಸವ ಮಂಟಪದಲ್ಲಿ ಅಕ್ಟೋಬರ್ 22, 2023 ಭಾನುವಾರ ಸಂಜೆ 5 ಗಂಟೆಗೆ ‘ಪದ ಕೇಳೋಣ ಬರ್ರಿ’ ಅನ್ನೋ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಜಾನಪದ ಹಾಗೂ ಭಾವಗೀತೆಗಳ ಸಂಗೀತ ಕಾರ್ಯಕ್ರಮವನ್ನು ದೇವರ ಹಿಪ್ಪರಗಿ ತಹಶೀಲ್ದಾರ್ ಪ್ರಕಾಶ ಸಿಂದಗಿ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ನಿವೃತ್ತ ಪ್ರಾಚಾರ್ಯರು, ಲೇಖಕರಾದ ಪ್ರೊ.ಎಂ.ವಿ ಗಣಾಚಾರಿ, ತಳವಾರ ನೌಕರರ ಮಹಾಸಭಾ ತಾಲೂಕು ಅಧ್ಯಕ್ಷ ಭರತೇಶ ಹಿರೋಳ್ಳಿ, ಬೋರಗಿಯ ಜಾನಪದ ಗಾಯಕಿ ಇಮಾಂಬಿ ದೊಡಮನಿ ಭಾಗವಹಿಸಲಿದ್ದಾರೆ.
ಸಿಂದಗಿಯ ಎಂ.ಬಿ ಅಲ್ದಿ, ಕಣ್ಣಗುಡ್ಡಿಹಾಳದ ನಾನಾಗೌಡ ಪಾಟೀಲ, ಆಲಮೇಲದ ಐಶ್ವರ್ಯ ಕೊಳಾರಿ, ಕಕ್ಕಳಮೇಲಿಯ ಮಹಾದೇವ ಪತ್ತಾರ, ಬೋರಗಿಯ ಭೀಮರಾಯ ಬಡಗೇರ, ಕೊಗಟನೂರಿನ ಕಿರಣ ನಾವಿ ಅವರು ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇದೇ ವೇಳೆ ಬರಹಗಾರ ಬಸವರಾಜ ಬಡಗೇರ ಪರಿಷ್ಕರಣೆ ಮಾಡಿರುವ, ಗಂಗಾಧರ ವಿಶ್ವಕರ್ಮ ಹಾಡಿರುವ ‘ಅಂಭಾ ಭವಾನಿ’ ಆಡಿಯೋ ಬಿಡುಗಡೆಯಾಗಲಿದೆ ಎಂದು ಮಾಧ್ಯಮರಂಗ ಫೌಂಡೇಶನ್ ಅಧ್ಯಕ್ಷ ನಾಗೇಶ ತಳವಾರ ತಿಳಿಸಿದ್ದಾರೆ.