ಸಿಂದಗಿ: ಹಿರಿಯ ಪತ್ರಕರ್ತ, ನಾಡೋಜ ಡಾ.ಪಾಟೀಲ ಪುಟ್ಟಪ್ಪನವರಿಗೆ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯ್ತು. ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಮಂಗಳವಾರ ಸಂಜೆ ಅಗಲಿದ ಹಿರಿಯ ಚೇತನಕ್ಕೆ ಗೌರವ ನಮನ ಸಲ್ಲಿಸಲಾಯ್ತು.
ಈ ವೇಳೆ ಮಾತ್ನಾಡಿದ ಅತಿಥಿಗಳು, ಪರಿಷತ್ತಿನ ಪದಾಧಿಕಾರಿಗಳು, ಡಾ.ಪಾಟೀಲ ಪುಟ್ಟಪ್ಪನವರ ವೃತ್ತಿ ಬದುಕು, ಸಾಹಿತ್ಯ ಸೇವೆ, ಚಳವಳಿ, ಅವರ ವೈಯಕ್ತಿ ಜೀವನದ ರೀತಿ ಸೇರಿದಂತೆ ಬಹುಮುಖ ವ್ಯಕ್ತಿತ್ವದ ಕುರಿತು ತಂತಮ್ಮ ಅಭಿಪ್ರಾಯಗಳನ್ನ ಹಂಚಿಕೊಂಡರು.
ಇದೇ ವೇಳೆ ವಿದ್ಯಾರ್ಥಿಗಳು ಸಹ ಡಾ.ಪಾಟೀಲ ಪುಟ್ಟಪ್ಪನವರ ಬದುಕು ಬರಹದ ಕುರಿತು ಮಾತ್ನಾಡುವ ಮೂಲಕ, ಅವರ ಬದುಕಿನ ಆದರ್ಶಗಳನ್ನ ನಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳೋಣ ಅನ್ನೋ ಮಾತುಗಳನ್ನಾಡಿದ್ರು. ಈ ಮುಖೇನ ಪಾಪು ಅವರನ್ನ ತಾವು ಅರ್ಥೈಸಿಕೊಂಡ ಬಗೆ ಕುರಿತು ಮಾತ್ನಾಡಿದ್ರು.
ಈ ವೇಳೆ ಮಸಾಪ ತಾಲೂಕಾಧ್ಯಕ್ಷ ಅಶೋಕ ಬಿರಾದಾರ, ಆರ್ ಡಿ ಪಾಟೀಲ ಕಾಲೇಜಿನ ಪ್ರಾಧ್ಯಾಪಕ ಪಿ.ಎ ಮಡಿವಾಳ, ಸಂಗಮೇಶ್ವರ ವಿದ್ಯಾಲಯದ ಸಂಚಾಲಕ ಗುರುನಾಥ ಅರಳಗುಂಡಗಿ, ಶಿಕ್ಷಕರಾದ ಶಿವಾನಂದ ಶಹಾಪೂರ, ಬಸವರಾಜ ಅಗಸರ, ಗುಂಡುಪ್ಪ ಕುಂಬಾರ ಸೇರಿದಂತೆ ಅನೇಕರು ಭಾಗವಹಿಸಿದ್ರು.