ಹುಬ್ಬಳ್ಳಿ: ಪ್ರಧಾನಿ ಮೋದಿ ಆಧುನಿಕ ಭಸ್ಮಾಸುರರಾಗಿ ಕಾಣುತ್ತಿದ್ದಾರೆ ಅಂತಾ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತ್ನಾಡಿದ ಅವರು, ದೇಶದ ಜನತೆಗೆ ಅನೇಕ ಭರವಸೆ, ಆಶ್ವಾಸನೆಗಳನ್ನು ಕೊಟ್ಟರು. ಆದ್ರೆ, ಅವರು ನೀಡಿದ ಭರವಸೆಯ ವಿರುದ್ಧವಾಗಿದ್ದಾರೆ ಅಂತಾ ಕಿಡಿಕಾರಿದ್ರು.
ಉದ್ಯೋಗ ಸೃಷ್ಟಿಯ ಭರವಸೆ ಹುಸಿಯಾಗಿದೆ. ದೇಶದ ಆರ್ಥಿಕ ಪರಿಸ್ಥಿತಿ ಡೋಲಾಯಮಾನವಾಗಿದೆ. ಡಾಲರ್ ಎದುರು ರುಪಾಯಿ ಮೌಲ್ಯ ಕುಸಿಯುತ್ತಿದೆ. ಭಾವನಾತ್ಮಕ ವಿಷಯಗಳನ್ನು ಜನರ ಮುಂದಿಡುವ ಮೂಲಕ ದೇಶದ ಜನರ ಹಾದಿ ತಪ್ಪಿಸುವ ಕೆಲಸವನ್ನ ಮೋದಿ ಮತ್ತು ಅಮಿತ ಶಾ ಟೀಮ್ ಮಾಡುತ್ತಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು.
ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಗೋಲಿಬಾರ್ ಘಟನೆಗೆ ರಾಜ್ಯ ಸರ್ಕಾರವೇ ನೇರ ಹೊಣೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬೇಹುಗಾರಿಕೆ ಇಲಾಖೆ ಜೀವಂತವಾಗಿದ್ದರೆ ಈ ಘಟನೆಯ ವಿವರಣೆ ಕೊಡಬೇಕಿತ್ತು. ಯಡಿಯೂರಪ್ಪ ಅವರಿಗೆ ಬಹಳಷ್ಟು ಜನ ರಿಮೋಟ್ ಕಂಟ್ರೋಲ್ ಗಳಿದ್ದಾರೆ ಅಂತಾ ಕಾಲೆಳೆದ್ರು.