ಟೆನ್ಷನ್ ತಂದ ಇಬ್ಬರು ಜೆಡಿಎಸ್ ಶಾಸಕರು

267

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನಾಳೆ ರಾಜ್ಯಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಜೆಡಿಎಸ್ ಶಾಸಕಕಾಂಗ ಪಕ್ಷದ ನಾಯಕ ಹೆಚ್.ಡಿ ಕುಮಾರಸ್ವಾಮಿ, ಸಭೆಯ ಮೇಲೆ ಸಭೆ ನಡೆಸುತ್ತಿದ್ದಾರೆ. ಇದರ ನಡುವೆ ಇಬ್ಬರು ಶಾಸಕರು ಟೆನ್ಷನ್ ಕೊಟ್ಟಿದ್ದಾರೆ.

ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಹಾಗೂ ಗುಬ್ಬಿ ಶಾಸಕ ಶ್ರೀನಿವಾಸಗೌಡ ಅವರ ನಡೆ ಜೆಡಿಎಸ್ ಗೆ ಟೆನ್ಷನ್ ತಂದಿದೆ. ಶಾಸಕ ಗೌರಿಶಂಕರ್ ಕುಟುಂಬ ಸಮೇತ ವಿದೇಶಿ ಪ್ರವಾಸಕ್ಕೆ ಹೋಗಿದ್ದಾರೆ. ಇಂದು ಸಂಜೆ ಬರುತ್ತೇನೆ, ನಾಳೆ ಮತ ಚಲಾಯಿಸುತ್ತೇನೆ ಎಂದಿದ್ದಾರಂತೆ. ಆದರೆ, ಇದ್ಯಾಕೋ ಅನುಮಾನವಿದೆ.

ಗುಬ್ಬಿ ಶಾಸಕ ಶ್ರೀನಿವಾಸಗೌಡರ ನಡೆ ಸಹ ಅನುಮಾನ ಮೂಡಿಸಿದೆ. ಇತ್ತೀಚೆಗೆ ಅವರು ನೀಡಿದ ಹೇಳಿಕೆ ಇದಕ್ಕೆ ಪುಷ್ಠಿ ನೀಡುತ್ತದೆ. ಹೀಗಾಗಿ ನಾಳೆ ನಡೆಯುವ ಚುನಾವಣೆಯಲ್ಲಿ ಯಾರು ಅಡ್ಡಮತದಾನ ಮಾಡುತ್ತಾರೆ ಅನ್ನೋ ಕುತೂಹಲ ಮೂಡಿದೆ.




Leave a Reply

Your email address will not be published. Required fields are marked *

error: Content is protected !!