ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಮಾಡಿದ ಜೆಡಿಎಸ್ ಶಾಸಕ ಎಚ್.ಡಿ ರೇವಣ್ಣ, ಬ್ಯಾಲೇಟ್ ಪೇಪರ್ ನ್ನು ಡಿ.ಕೆ ಶಿವಕುಮಾರಗೆ ತೋರಿಸಿದ ಸಂಬಂಧ ಮತವನ್ನು ಅಸಿಂಧುಗೊಳಿಸಬೇಕೆಂದು ಬಿಜೆಪಿ ಚುನಾವಣೆ ಆಯೋಗಕ್ಕೆ ದೂರು ನೀಡಿತ್ತು. ಇದಕ್ಕೆ ಚುನಾವಣಾ ಆಯೋಗ ಕ್ಲೀನ್ ಚಿಟ್ ನೀಡಿದೆ.
ಸಿಸಿಟಿವ ಪರಿಶೀಲನೆ ನಡೆಸಲಾಗಿದೆ. ಮತ ಅಸಿಂಧು ಆಗಿಲ್ಲ. ಚುನಾವಣೆ ವೇಳೆ ರೇವಣ್ಣ ಹಾಗೂ ಡಿ.ಕೆ ಶಿವಕುಮಾರ್ ಸೂಚಕರಾಗಿದ್ದರು. ಹೀಗಾಗಿ ಬ್ಯಾಲೇಟ್ ಪೇಪರ್ ತೋರಿಸಬಹುದು ಎಂದಿದ್ದಾರೆ. ಈ ಕಾರಣಕ್ಕೆ ಮತವನ್ನು ಅಸಿಂಧು ಮಾಡಲು ಬರುವುದಿಲ್ಲವೆಂದು ಚುನಾವಣಾಧಿಕಾರಿ ವಿಶಾಲಾಕ್ಷಿ ತಿಳಿಸಿದ್ದಾರೆ.