ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಶಾಲೆಗಳನ್ನ ಶೀಘ್ರದಲ್ಲಿ ಶುರು ಮಾಡಲಾಗುತ್ತೆ ಅನ್ನೋ ವಿಚಾರಕ್ಕೆ ಸಂಬಂಧಿಸಿದಂತೆ, ಶಿಕ್ಷಣ ಸಚಿವ ಸುರೇಶಕುಮಾರ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಗಡಿಬಿಡಿಯಲ್ಲಿ ಶಾಲೆಗಳನ್ನ ಶುರು ಮಾಡುವುದಿಲ್ಲ. ಫೇಸ್ ಬುಕ್ ಲೈವ್ ಬರುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದಲ್ಲಿ ಈಗಾಗ್ಲೇ ಎಲ್ಲೆಡೆ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಯಾಕಂದ್ರೆ, ಮಕ್ಕಳಿಗೆ ಸಾಮಾಜಿಕ ಅಂತರ ಗೊತ್ತಿಲ್ಲ. ಸದಾ ಸ್ಯಾನಟೈಜರ್ ಬಳಸಲು ಆಗಲ್ಲ. ಮಾಸ್ಕ್ ಧರಿಸಿಕೊಂಡು ಇರೋದು ಕಷ್ಟ. ಹೀಗಾಗಿ ಮಕ್ಕಳನ್ನ ಸಧ್ಯಕ್ಕೆ ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕ್ತಿದ್ದಾರೆ. ಹೀಗಾಗಿ ಫೇಸ್ ಬುಕ್ ಲೈವ್ ಬಂದಿದ್ದ ಸಚಿವರು, ಕೋವಿಡ್ 19 ನಿಯಂತ್ರಣಕ್ಕೆ ಬರುವವರೆಗೂ ಶಾಲೆ ಶುರು ಮಾಡಬಾರದು. ಸುರಕ್ಷತಾ ಕ್ರಮದೊಂದಿಗೆ ಶಾಲೆ ಪ್ರಾರಂಭಿಸಬೇಕು ಅನ್ನೋ ವಿಚಾರ ಸೇರಿದಂತೆ ಹಲವು ಅಭಿಪ್ರಾಯಗಳು ಜನರಿಂದ ಬಂದಿವೆ. ಹೀಗಾಗಿ ಆತುರದ ನಿರ್ಧಾರ ತೆಗೆದುಕೊಳ್ಳುವಿದಲ್ಲವೆಂದು ಹೇಳಿದ್ದಾರೆ.