ಪ್ರಜಾಸ್ತ್ರ ಸುದ್ದಿ
ಧಾರವಾಡ: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಸಧ್ಯಕ್ಕೆ ನಿಲ್ಲುವುದಿಲ್ಲ. ಸರ್ಕಾರ ಕ್ಯಾರೆ ಅಂತಿಲ್ಲ. ಹೀಗಾಗಿ ಹೋರಾಟ ಮುಂದುವರೆಯಲಿದೆ. ಈ ಬಗ್ಗೆ ಮಾತನಾಡಿರುವ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ತಪ್ಪಾಗಿದೆ. ಅದನ್ನು ಮರುಪರಿಷ್ಕರಣೆಗೆ ಮುಂದಾಗಿದ್ದೇವೆ ಎಂದಿದ್ದಾರೆ.
ಆಗಿರುವ ತಪ್ಪುಗಳನ್ನು ಸರಿಪಡಿಸಿ, ಇನ್ನೊಂದು ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ನೀಡುತ್ತೇವೆ ಎಂದಿದ್ದಾರೆ. ಪಠ್ಯದಲ್ಲಿ ಸಾಹಿತಿಗಳನ್ನು ಯಾವುದೇ ರೀತಿಯಿಂದ ಕಡೆಗಣಿಸಿಲ್ಲ. ಲೋಪದೋಷಗಳನ್ನು ಯಾರೇ ತೋರಿಸಿದರೂ ಸರಿಪಡಿಸುತ್ತೇವೆ ಎಂದು ಹೇಳಿದ್ದಾರೆ.
ಶಾಲೆಗಳನ್ನು ಆರಂಭಿಸಲು ತೋರಿಸುವ ಉತ್ಸಾಹ ಮಕ್ಕಳಿಗೆ ಪುಸ್ತಕ ನೀಡುವಾಗ ಯಾಕೆ ಇರುವುದಿಲ್ಲ. ವಿನಾಕರಣ ವಿವಾದ ಮಾಡಿಕೊಂಡು ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.