ಪ್ರತ್ಯೇಕ ಕಲ್ಯಾಣ ಕರ್ನಾಟಕ ಹೋರಾಟ: ಹಲವರ ಬಂಧನ

151

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ಪ್ರತ್ಯೇಕ ಕಲ್ಯಾಣ ಕರ್ನಾಟಕ ನಿರ್ಮಾಣ ಮಾಡಬೇಕೆಂದು ಹೇಳಿ, ಪ್ರತ್ಯೇಕ ಧ್ವಜಾರೋಹಣ ಮಾಡಲು ಯತ್ನಿಸಿದ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ತೆಲಂಗಾಣ ಮಾದರಿಯಲ್ಲಿ ಪ್ರತ್ಯೇಕ ರಾಜ್ಯ ನಿರ್ಮಾಣಕ್ಕೆ ಆಗ್ರಹಿಸಲಾಗಿದೆ.

ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ವತಿಯಿಂದ ಕೋರ್ಟ್ ಮಾರ್ಗವಾಗಿ ಸರ್ದಾರ್ ವಲ್ಲಾಬಾಯ್ ಪಟೇಲ್ ವೃತ್ತದವರೆಗೂ ಮೆರವಣಿಗೆ ನಡೆಸಿ ಅಲ್ಲಿ ಪ್ರತ್ಯೇಕ ಧ್ವಜಾರೋಹಣ ನಡೆಸಬೇಕು ಎಂದುಕೊಂಡು ಹೊರಟಿದ್ದ ನೂರಾರು ಜನರನ್ನು ಮಾರ್ಗಮಧ್ಯ ಬಂಧಿಸಲಾಗಿದೆ.

ದಿವಂಗತ ಉಮೇಶ್ ಕತ್ತಿ, ವೈಜನಾಥ್ ಪಾಟೀಲ ಭಾವಚಿತ್ರ ಹಾಗೂ ಪ್ರತ್ಯೇಕ ಧ್ವಜ ಹಿಡಿದು ಹೊರಟಿದ್ದವರನ್ನು ಬಂಧಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!