ಬಜೆಟ್ ಮಂಡನೆಗೂ ಮೊದ್ಲೇ ರೈತರಿಗೆ ಸಿಹಿ ಸುದ್ದಿ

440

ಬೆಂಗಳೂರು: 10 ಗಂಟೆಗೆ ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಬಿ.ಎಸ್ ಯಡಿಯೂರಪ್ಪ. ಬಜೆಟ್ ಮಂಡನೆಗೆ ಮೊದ್ಲು ಮಹಾಗಣಪತಿ ಹಾಗೂ ಮಲ್ಲೇಶ್ವರಂದಲ್ಲಿರುವ ರಾಘವೇಂದ್ರ ಮಠಕ್ಕೆ ಭೇಟಿ ನೀಡಿ, ಬಜೆಟ್ ಪ್ರತಿಗೆ ಪೂಜೆ ಸಲ್ಲಿಸಿದ್ರು. ಡಿಸಿಎಂ ಡಾ.ಸಿ ಅಶ್ವಥನಾರಾಯಣ ಸೇರಿದಂತೆ ಸಚಿವರು ಸಾಥ್ ನೀಡಿದ್ರು. ಈ ವೇಳೆ ಮಾತ್ನಾಡಿದ ಅವರು, ಯಾವುದೇ ಯೋಜನೆಗಳನ್ನ ಕಡಿತ ಮಾಡ್ತಿಲ್ಲ. ರೈತಪರವಾದ ಬಜೆಟ್ ಮಂಡಿಸುವುದಾಗಿ ಹೇಳಿದ್ದಾರೆ.

ಬಜೆಟ್ ಮಂಡನೆಗೂ ಮೊದ್ಲು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಸಿಎಂ, 2020-21ನೇ ಸಾಲಿನ ಬಜೆಟ್ ನಲ್ಲಿ ಯಾವುದೇ ಯೋಜನೆಗಳನ್ನ ಕಡಿತಗೊಳಿಸುತ್ತಿಲ್ಲ. ವಿಶೇಷ ಯೋಜನೆಗಳಿಲ್ಲದ ಬಜೆಟ್ ಆಗಿದೆ. ರೈತರಿಗೆ ಮೊದಲು ಆದ್ಯತೆ ನೀಡಲಾಗಿದೆ ಅಂತಾ ಹೇಳಿದ್ದಾರೆ. ಈ ಮೂಲಕ ಮಹತ್ವದ ಯೋಜನೆಗಳಿಗೆ ಬ್ರೇಕ್ ಹಾಕಲಾಗುತ್ತೆ ಅನ್ನೋ ಮಾತುಗಳಿಗೆ ತೆರೆ ಎಳೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!