ಸುರಪುರ: ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ಸಿಡಿಲು ಬಡಿದು ಅಜ್ಜ ಮತ್ತು ಮೊಮ್ಮಗ ಸಾವನ್ನಪ್ಪಿದ್ದಾರೆ. ನಿನ್ನೆ ಸಂಜೆ ಮಳೆಯಾಗ್ತಿದ್ದ ಟೈಂನಲ್ಲಿ ಸಿಡಿಲು ಬಡೆದ ಎರಡು ಅಮಾಯಕ ಜೀವಗಳು ಬಲಿಯಾಗಿವೆ.
50 ವರ್ಷದ ಮಲ್ಲಪ್ಪ ಹಾಗೂ 14 ವರ್ಷದ ಕುಮಾರ ಸಾವನ್ನಪ್ಪಿದ ದುರ್ದೈವಿಗಳು. ಕುರಿ ಮೇಯಿಸಲು ನಗನೂರ ಬೆಟ್ಟಕ್ಕೆ ಹೋಗಿದ್ದಾರೆ. ಸಂಜೆ ಮಳೆಯ ಬರುಲು ಶುರು ಮಾಡಿದೆ. ಆಗ ಅಲ್ಲಿನ ಬಂಡೆಯೊಂದರಡಿಯಲ್ಲಿ ಆಶ್ರಯ ಪಡೆದಿದ್ದಾರೆ. ಈ ವೇಳೆ ಸಿಡಿಲು ಬಡಿದು ಅಜ್ಜ ಮತ್ತು ಮೊಮ್ಮಗ ಸಾವನ್ನಪ್ಪಿದ್ದಾರೆ. ಈ ಸಂಬಂಧ ಕೆಂಭಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.