ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಪ್ರೀತಿ ವಿಚಾರಕ್ಕೆ ಸಂಬಂಧಿಸಿದಂತೆ ಇದೆ ಜೂನ್ 7ರಂದು ಗಲಾಟೆಯಲ್ಲಿ ತೀವ್ರವಾಗಿ ಗಾಯಗೊಡಿದ್ದ ಯುವತಿ ಸಾವನ್ನಪ್ಪಿದ್ದಾಳೆ. ಇಷ್ಟುದಿನ ಕೋಮಾದಲ್ಲಿದ್ದ ಯುವತಿ ಇಂದು ಸಾವನ್ನಪ್ಪಿದ್ದಾಳೆ.
ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಪ್ರಕರಣ ನಡೆದಿತ್ತು. ನಾಲ್ಕು ವರ್ಷಗಳ ಕಾಲ ಬಬಿತ್ ಹಾಗೂ ಯುವತಿ ಪ್ರೀತಿ ಮಾಡ್ತಿದ್ರು. ಕೆಲ ತಿಂಗಳ ಹಿಂದೆ ಮನಃಸ್ಥಾಪವಾಗಿ ಬೇರೆಯಾಗಿದ್ರು. ಆಗ ಯುವತಿ ರಾಹುಲ ಅನ್ನೋ ಯುವಕನ ಜೊತೆ ಕ್ಲೋಸ್ ಆಗಿದ್ಳು. ಇಂಟ್ರಸ್ಟಿಂಗ್ ಅಂದ್ರೆ, ಈ ಮೂವರು ಒಂದೇ ಏರಿಯಾದವರು.
ಜೂನ್ 7ರಂದು ರಾಹುಲ ಹುಟ್ಟು ಹಬ್ಬದ ನಿಮಿತ್ತ ಯುವತಿಗೆ ಅವನ ಮನೆಗೆ ಹೋಗಿದ್ದಾಳೆ. ಇದು ತಿಳಿದ ಬಬಿತ್ ರಾಹುಲ ಮನೆಗೆ ಬಂದು ಗಲಾಟೆ ಮಾಡಿದ್ದ. ಅಲ್ಲಿಂದ ಯುವತಿಯನ್ನ ಬಬಿತ್ ತನ್ನ ಮನೆಗೆ ಕರೆದುಕೊಂಡು ಬಂದಿದ್ದ. ಗಲಾಟೆ ಮುಂದುವರೆದಿತ್ತು. ಅದು ವಿಕೋಪಕ್ಕೆ ಹೋಗಿ ಬಬಿತ್ ಹೆಲ್ಮೆಟ್ ನಿಂದ ಆಕೆ ತಲೆಗೆ ಹೊಡೆದಿದ್ದ. ಹೀಗಾಗಿ ಯುವತಿ ಪ್ರಜ್ಞೆ ತಪ್ಪಿ ಬಿದ್ದಿದ್ಳು. ಆಕ್ಸಿಡೆಂಟ್ ಕಥೆ ಕಟ್ಟಿ ಆಕೆ ಮನೆಗೆ ಫೋನ್ ಮಾಡಿದ್ದ.
ಇದು ಅಪಘಾತವಲ್ಲ. ಹಲ್ಲೆ ಎಂದು ಪೊಲೀಸ್ರು ಕೇಸ್ ಕೊಟ್ಟಿದ್ರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಬಿತ್ ಹಾಗೂ ರಾಹುಲನನ್ನ ವಶಕ್ಕೆ ಪಡೆದಿದ್ರು. ಈಗ ಯುವತಿ ಸಾವನ್ನಪ್ಪಿದ್ದು, ಕೊಲೆಯ ಪ್ರಕರಣ ದಾಖಲಾಗಿದೆ.