ಪ್ರಜಾಸ್ತ್ರ ಸುದ್ದಿ
ನಾಗಮಂಗಲ: ತಾಲೂಕಿನ ಬೆಳ್ಳೂರು ಹೋಬಳಿಯ ಸೆಣಬ ಗೇಟ್ ಬಳಿಯ ನಾಗಮಂಗಲ ಶಾಖಾ ನಾಲೆಯ ನೀರಿನಲ್ಲಿ ಗಂಡಸಿನ ಶವ ಪತ್ತೆಯಾಗಿದೆ. ನೀರಿನಲ್ಲಿ ತೇಲಿಕೊಂಡು ಬಂದು ನಾಲೆಯ ಪೈಪಿಗೆ ಸಿಕ್ಕಿಕೊಂಡಿತ್ತು. ಹೇಮಾವತಿ ನಾಲೆಯ ಸಹಾಯಕ ಇಂಜಿನಿಯರ್ ಭರತಕುಮಾರ ಅವರ ದೂರಿನನ್ವಯ ಸ್ಥಳಕ್ಕೆ ಬೆಳ್ಳೂರು ಪೊಲೀಸ್ ಠಾಣಾ ಪಿಎಸ್ಐ ದಯಾನಂದ ಭೇಟಿ ನೀಡಿ, ಶವವನ್ನ ಮೇಲಕ್ಕೆ ಎತ್ತಿ ಬಿಜಿಎಸ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.
ಮೃತ ಅಪರಿಚಿತ ವ್ಯಕ್ತಿಯ ಶವವಾಗಿದ್ದು, ಸುಮಾರು 45 ರಿಂದ 50 ವಯಸ್ಸು ಇರಬಹುದು ಎನ್ನಲಾಗ್ತಿದೆ. ಗುರುತು ಸಿಗದಷ್ಟು ಶವ ಕೊಳೆತು ಹೋಗಿದೆ.
ಇನ್ನು ಇದೆ ರೀತಿ ತಾಲೂಕಿನ ಇಸ್ಲಾಂಪುರ ಬಳಿಯ ಹೇಮಾವತಿ ಕಾಲುವೆ ನಾಲೆಯ ಬದಿಯಲ್ಲಿ ಹೆಣ್ಣಿನ ಶವವೊಂದು ತೇಲಿಕೊಂಡು ಬಂದಿದೆ. ಹತ್ತು ದಿನಗಳಿಂದ ಹೇಮಾವತಿ ಮುಖ್ಯ ನಾಲೆಯಲ್ಲಿ ನೀರು ಹರಿಸಲಾಗ್ತಿದೆ. ಹೇಮಾವತಿ ಉಪ ವಿಭಾಗ ಕಚೇರಿಯಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸ್ತಿರುವ ಶ್ರೀನಿವಾಸಗೌಡ ಎಂಬವರು ನಾಲೆಯ ವೀಕ್ಷಣೆಯ ಗಸ್ತಿನಲ್ಲಿದ್ದಾಗ ಮಹಿಳೆ ಶವ ಕಂಡು ಬಂದಿದೆ.
ಈ ಬಗ್ಗೆ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪಿಎಸ್ಐ ರಾಮಚಂದ್ರರವರು, ಶವವನ್ನು ಹೊರತೆಗೆದು ನೋಡಿದಾಗ ಮಹಿಳೆಯ ಶವವೆಂದು ತಿಳಿದುಬಂದಿದ್ದು. 25 ರಿಂದ 30 ವಯಸ್ಸಾಗಿದ್ದು, ಗುರುತು ಸಿಗದ ರೀತಿಯಲ್ಲಿ ಶವ ನೀರಿನಲ್ಲಿ ಕೊಳೆತು ಹೋಗಿದೆ ಎಂದು ತಿಳಿಸಿದ್ದಾರೆ. ಹೀಗೆ ಎರಡು ಪ್ರತ್ಯೇಕ ಪ್ರಕರಣಗಳು ಕಂಡು ಬಂದಿವೆ.