ಬೆಂಗಳೂರು: ರಾಜ್ಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ ಪಿಎ ರಮೇಶ ಆತ್ಮಹತ್ಯ ಪ್ರಕರಣಕ್ಕೆ ಇದೀಗ ಬಹುದೊಡ್ಡ ತಿರುವು ಸಿಕ್ಕಿದೆ. ಈ ಸೂಸೈಡ್ ಬಹುಕೋಟಿ ವಂಚನೆ ಪ್ರಕರಣದಿಂದ ಸದ್ದು ಮಾಡಿದ್ದ ಐಎಂಎ ಸಂಸ್ಥೆ ಕಡೆ ಬೊಟ್ಟು ಮಾಡ್ತಿದೆ.
ಎರಡು ತಂಡಗಳಾಗಿ ಆತ್ಮಹತ್ಯೆಯ ತನಿಖೆಯನ್ನ ನಡೆಸ್ತಿರುವ ಪೊಲೀಸ್ರಿಗೆ ಮಹತ್ವದ ಮಾಹಿತಿಗಳು ಸಿಕ್ಕಿವೆ. ಪರಮೇಶ್ವರ ಹೆಸರು ದುರ್ಬಳಕೆ ಮಾಡಿಕೊಂಡು ಐಎಂಎ ಸಂಸ್ಥೆಯಿಂದ 5 ಕೋಟಿ ರೂಪಾಯಿ ಹಣ ಪಡೆದಿದ್ದನಂತೆ. ಇದನ್ನ ಡೈರಿಯಲ್ಲಿ ಬರೆದಿದ್ದ. ಐಟಿ ಅಧಿಕಾರಿಗಳು ಮನೆಗೆ ಬಂದಾಗ ಈ ಡೈರಿಯನ್ನ ವಶಕ್ಕೆ ಪಡೆದಿದ್ರು. ಇದರಿಂದ ಹೆದರಿದ್ದ ಅನ್ನೋದು ಉನ್ನತ ಮೂಲದ ಪೊಲೀಸ್ರಿಂದ ತಿಳಿದು ಬಂದಿದೆ.
ಇನ್ನು ಐಟಿ ದಾಳೆ ವೇಳೆ 2 ಕೋಟಿ ರೂಪಾಯಿ ಸಿಕ್ಕಿದೆಯಂತೆ. ಇದರ ಜೊತೆಗೆ ಕೆಲ ಶೋಕಿಗಳನ್ನ ಬೆಳಸಿಕೊಂಡಿದ್ದ ರಮೇಶ, ಕ್ಲಬ್ ವೊಂದರ ಬೆಡ್ ರೂಮಿನಲ್ಲಿನ ಖಾಸಗಿ ವಿಡಿಯೋಗಳನ್ನ ಮೊಬೈಲ್ ನಲ್ಲಿ ಇಟ್ಟುಕೊಂಡಿದ್ದ. ಇದು ಸಹ ಐಟಿ ಅಧಿಕಾರಿಗಳ ಕೈಗೆ ಸಿಕ್ಕಿತ್ತು. ಹೀಗೆ ಸಾಕಷ್ಟು ವಿಚಾರಗಳು ಐಟಿ ಅಧಿಕಾರಿಗಳಿಗೆ ಗೊತ್ತಾಗಿತ್ತು.
ಅನೇಕ ವರ್ಷಗಳಿಂದ ಕಾಲ ಪರಮೇಶ್ವರ ಬಳಿ ಕೆಲಸ ಮಾಡ್ತಿದ್ದ ರಮೇಶ, ಅವರಿಗೆ ಮೋಸ ಮಾಡಿದೆ ಅನ್ನೋ ಅಳುಕ, ಕೆಲ ವೈಯಕ್ತಿಕ ವಿಚಾರಗಳು ಬಹಿರಂಗಗೊಂಡ್ರೆ ಮರ್ಯಾದೆ ಹೋಗುತ್ತೆ ಅನ್ನೋ ಕಾರಣಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅನ್ನೋದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.