ತಾಳಿಕೋಟೆ: ನಿನ್ನೆ ತಡರಾತ್ರಿ ನಡೆದ ಬೈಕ್ ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದ ಘಟನೆ ಇಲ್ಲಿನ ಡೋಣಿ ಬ್ರಿಡ್ಜ್ ಬಳಿ ನಡೆದಿದೆ. ರಸ್ತೆಯ ಪಕ್ಷದ ಸೇತುವೆ ಸುರಕ್ಷಕ ಗೋಡೆಗೆ ರಾಯಲ್ ಎನ್ ಫಿಲ್ಡ್ ಬೈಕ್ ಡಿಕ್ಕಿ ಹೊಡೆದಿದೆ. ಇದ್ರಿಂದಾಗಿ ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ವಿಜಯಪುರ ಜಿಲ್ಲೆ ತಾಳಿಕೋಟೆ ಸಮೀಪದ ಡೋಣಿ ಬ್ರಿಡ್ಜ್ ಬಳಿ ಅನಾಹುತ ನಡೆದಿದೆ. ಇದರಲ್ಲಿ ಅಸ್ಕಿ ಗ್ರಾಮದ ಕೊಡಲಿ ಶಾಂತಗೌಡನ ಮಗ ಸಂಗಣ್ಣ ಹಾಗೂ ಚೌದ್ರಿ ಮುತ್ತಣ್ಣ ಅನ್ನೋ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.