ರಾಜ್ಯದ ಭೀಕರ ಅಪಘಾತ ಮರೆಯುವ ಮುನ್ನವೇ ಮತ್ತೊಂದು ದುರಂತ

208

ಪ್ರಜಾಸ್ತ್ರ ಸುದ್ದಿ

ಶ್ರೀನಗರ: ಕರ್ನಾಟಕದ ಮೈಸೂರಿನ ಕುರಬೂರು ಹತ್ತಿರ ಸೋಮವಾರ ಭೀಕರ ಅಪಘಾತ ಸಂಭವಿಸಿ 10 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದು ಮರೆಯುವ ಮುನ್ನವೇ ಇಂದು ಮುಂಜಾನೆ ಕಣಿವೆ ನಾಡಿನಲ್ಲಿ ಬಸ್ ಅಪಾಘತದಲ್ಲಿ 10 ಮಂದಿ ಮೃತಪಟ್ಟಿದ್ದಾರೆ.

ಜಾಜ್ಜರ್ ಕೋಟ್ಲಿ ಹತ್ತಿರ ಇರುವ ಜಮ್ಮು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿ 75 ಪ್ರಯಾಣಿಕರನ್ನು ಕರೆದುಕೊಂಡು ಹೊರಟಿದ್ದ ಬಸ್ ಸೇತುವೆಯಿಂದ ಕಳಗೆ ಬಿದ್ದಿದೆ. ಇದರ ಪರಿಣಾಮ 10 ಜನರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇನ್ನು ರಾಜಸ್ಥಾನದಲ್ಲಿಯೂ ಸೋಮವಾರ ಸಂಭವಿಸಿದೆ ಟ್ರ್ಯಾಕ್ಟರ್ ಅಪಾಘತದಲ್ಲಿ 8 ಜನರು ಸಾವನ್ನಪ್ಪಿದ್ದಾರೆ. ಕಳೆದ ಎರಡ್ಮೂರು ದಿನಗಳಲ್ಲಿ ವಿವಿಧ ರಾಜ್ಯಗಳಲ್ಲಿ ಹಲವು ಭೀಕರ ಅಪಘಾತಗಳು ನಡೆದಿದ್ದು, ಅಪಾರ ಪ್ರಮಾಣದಲ್ಲಿ ಜೀವ ಹಾನಿಗಳಾಗಿವೆ.




Leave a Reply

Your email address will not be published. Required fields are marked *

error: Content is protected !!