ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಸಂಬಂಧ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿರುವುದ್ರಿಂದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇದರ ನಡುವೆ ಗೆದ್ದ 11 ಶಾಸಕರಲ್ಲಿ ಟೆನ್ಷನ್ ಶುರುವಾಗಿದೆ. ಯಾಕಂದ್ರೆ, ಬಿಎಸ್ವೈ 10+3 ಸೂತ್ರಕ್ಕೆ ಒಪ್ಪಿಗೆ ಸಿಕ್ಕಿದೆ. ಹೀಗಾಗಿ 11ರಲ್ಲಿ ಯಾರು ಒಬ್ಬರು ಔಟ್ ಆಗ್ತಾರೆ ಅನ್ನೋ ಟೆನ್ಷನ್.
ಇದರ ನಡುವೆ ಸೋತಿರುವ ಎಂಟಿಬಿ ನಾಗರಾಜ, ಹೆಚ್.ವಿಶ್ವನಾಥ ಅವರು ಸಹ ಸಚಿವ ಸ್ಥಾನದ ಕನಸು ಕಾಣ್ತಿದ್ದಾರೆ. ಇದೀಗ ಗೆದ್ದಿರುವ 11ರಲ್ಲಿ 10 ಮಂದಿಗೆ ಅಂತಾ ಹೇಳಿರುವುದು ಇವರಿಗೆ ಶಾಕ್ ನೀಡಿದಂತಾಗಿದೆ. ಹೀಗಾಗಿ ಬಿಜೆಪಿ ಸರ್ಕಾರ ರಚನೆಗೆ ಬೆಂಬಲ ನೀಡಿದ ಯಾವೆಲ್ಲ 10 ಶಾಸಕರು ಹಾಗೂ 3 ಮೂಲ ಬಿಜೆಪಿಗರಿಗೆ ಮಂತ್ರಿ ಪಟ್ಟ ಸಿಗುತ್ತೆ ಅನ್ನೋದರ ಲಿಸ್ಟ್ ಇಂದು ಸಂಜೆ ಹೊರ ಬೀಳುವ ಸಾಧ್ಯತೆಯಿದೆ.
ಸಚಿವ ಆಕಾಂಕ್ಷಿಗಳ ಲಿಸ್ಟ್ ದೊಡ್ಡದಿದ್ದು, ಸಿಎಂ ಬಿ.ಎಸ್ ಯಡಿಯೂರಪ್ಪ ಯಾರ ಮೇಲೆ ತಮ್ಮ ಕೃಪಾಕಟಾಕ್ಷೆ ತೋರಿಸ್ತಾರೆ ಅನ್ನೋ ಕುತೂಹಲ ಮೂಡಿದೆ.