ಪ್ರಜಾಸ್ತ್ರ ಸುದ್ದಿ
ಸಿಂದಗಿ: ತಾಲೂಕಿನ ಬೂದಿಹಾಳ ಪಿ.ಎಚ್ ಗ್ರಾಮದ ರೈತನೊಬ್ಬ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 40 ವರ್ಷದ ಮಲಕ್ಕಣ್ಣ ಬಿರಾದಾರ ಎಂಬಾತ ಕನ್ನೊಳ್ಳಿ ಗ್ರಾಮದಲ್ಲಿರುವ ತನ್ನ ಜಮೀನಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೂದಿಹಾಳ ಪಿ.ಎಚ್ ಗ್ರಾಮದವನಾದ ಈತನ ಹೆಸರಿನಲ್ಲಿ ಕನ್ನೊಳ್ಳಿ ಗ್ರಾಮದಲ್ಲಿ 2 ಎಕರೆ 31 ಗುಂಟೆ ಜಮೀನು ಇದೆ. ಬೆಳೆ ಸಾಲ ಎಂದು ಕನ್ನೊಳ್ಳಿ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನಲ್ಲಿ 95 ಸಾವಿರ ರೂಪಾಯಿ ಹಾಗೂ ಕೈ ಸಾಲವೆಂದು 4 ಲಕ್ಷ ರೂಪಾಯಿ ಪಡೆದು ಹೊಲದಲ್ಲಿ ತೊಗರೆ ಬೆಳೆ ಬೆಳೆದಿದ್ದ. ಈ ಬಾರಿ ಮಳೆ ಹೆಚ್ಚಾಗಿದ್ರಿಂದ ತೊಗರೆ ಬೆಳೆ ಹಾಳಾಗಿದೆ.
ಬೆಳೆ ಹಾಳಾಗಿ ನಷ್ಟ ಅನುಭವಿಸಿದ್ರಿಂದ ಸಾಲ ತೀರಿಸುವುದು ಹೇಗೆಂದು ತಿಳಿಯದೆ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮೃತನಿಗೆ ತಾಯಿ, ಹೆಂಡ್ತಿ ಹಾಗೂ ನಾಲ್ವರು ಮಕ್ಕಳಿದ್ದಾರೆ. ಈ ಪ್ರಕರಣ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.