ಚಡಚಣ: ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಹಲಸಂಗಿ ಗ್ರಾಮದ ತೋಟದ ಮನೆಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ,ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ.
ಅಣಚಿ ಕ್ರಾಸ್ ಹತ್ತಿರದ ಅಮಸಿದ್ದ ಓಂಕಾರೆ ಹೂಗಾರ ಅವರಿಗೆ ಸೇರಿದ ಮನೆಯಲ್ಲಿನ ವಸ್ತುಗಳೆಲ್ಲ ಸುಟ್ಟು ಕರಕಲಾಗಿವೆ. ಘಟನೆಯಲ್ಲಿ ಸುಮಾರು 70 ಸಾವಿರ ಮೌಲ್ಯದ 2 ಹೋರಿಗಳು ಸಾವನ್ನಪ್ಪಿವೆ. 4 ಆಡಿನ ಮರಿಗಳಿಗೆ ಗಾಯಗಳಾಗಿವೆ. 10 ಚೀಲ ಗೋಧಿ, 10 ಚೀಲ ಜೋಳ, 5 ಚೀಲ ತೊಗರಿ ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಭಸ್ಮವಾಗಿವೆ.
ಮಗ ಭೀಮಾಶಂಕರ, ತಾಯಿ ಮಾಯಕ್ಕ, ಹೆಂಡತಿ ಸವಿತಾ, ಮಕ್ಕಳು ನಾಗೇಂದ್ರ, ಶ್ರಾವಣಿ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಈ ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿಶಾಕಮ ಸಿಬ್ಬಂಧಿ, ಝಳಕಿ ಠಾಣೆ ಸಿಬ್ಬಂದಿ ಹಾಗೂ ಪಶುವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಝಳಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.