ಯುವತಿಗೆ ಪಿಎಸ್ಐ ಕಪಾಳಮೋಕ್ಷ: ವರದಿ ಕೇಳಿದ ಎಸ್ಪಿ

361

ಪ್ರಜಾಸ್ತ್ರ ಸುದ್ದಿ

ಮಂಡ್ಯ: ನಗರದ ಬೆಸಗರಹಳ್ಳಿ ರಾಮಣ್ಣ ಸರ್ಕಲ್ ಬಳಿ ನಡೆದ ಯುವತಿ ಹಾಗೂ ಪಿಎಸ್ಐ ನಡುವಿನ ವಾಗ್ವಾದ ಹಾಗೂ ಯುವತಿ ಕಪಾಳಕ್ಕೆ ಎರಡು ಬಾರಿ ಪಿಎಸ್ಐ ಸವಿತಾಗೌಡ ಪಾಟೀಲ ಹೊಡೆದಿದ್ದು ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣ ಸಂಬಂಧ ವರದಿ ನೀಡುವಂತೆ ಎಸ್ಪಿ ಡಾ.ಅಶ್ವಿನಿ ಡಿವೈಎಸ್ಪಿಗೆ ಸೂಚಿಸಿದ್ದಾರೆ.

ಜಿಲ್ಲೆಯಲ್ಲಿ ಎಲ್ಲ ಪೊಲೀಸರು ಸೌಜನ್ಯದಿಂದ ನಡೆದುಕೊಳ್ಳಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವ ಸಂದರ್ಭದಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ. ಹೆಲ್ಮೆಟ್ ಧರಿಸದೆ ಇರುವ ಸಂಬಂಧ ಪೊಲೀಸರು ಗಾಡಿ ನಿಲ್ಲಿಸಿದ್ದರು. ಈ ವೇಳೆ ಯುವತಿ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಆಗ ತಾಳ್ಮೆ ಕಳೆದುಕೊಂಡ ಪಿಎಸ್ಐ ಸವಿತಾಗೌಡ ಯುವತಿಗೆ ಎರಡು ಬಾರಿ ಹೊಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!