ಪ್ರಜಾಸ್ತ್ರ ಸುದ್ದಿ
ಸಿಂದಗಿ: ಫೆಬ್ರವರಿ 21ರಂದು ಅಂತರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ನಿಮಿತ್ಯ ಪಟ್ಟಣದಲ್ಲಿ ‘ಮಾಧ್ಯಮರಂಗ ಫೌಂಡೇಶನ್’ ವತಿಯಿಂದ ಮಂಗಳವಾರ ಸಂಜೆ 4.30ಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ‘ಅನ್ನದ ಭಾಷೆಯಾಗಿ ಕನ್ನಡ’ ಅನ್ನೋ ವಿಷಯದ ಕುರಿತು ಉಪನ್ಯಾಸಕಿ ಮುಕ್ತಾಯಕ್ಕ ಕಟ್ಟಿ ಮಾತನಾಡಲಿದ್ದಾರೆ.
ಯುವ ಲೇಖಕ ಹಾಗೂ ಉಪನ್ಯಾಸಕ ಅಶೋಕ ಬಿರಾದಾರ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪಟ್ಟಣದ ಕನಕದಾಸ ಸರ್ಕಲ್ ಹತ್ತಿರ ಇರುವ ಮಲ್ಲು ಹಿರೋಳ್ಳಿ ಅವರ ನಿವಾಸದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಫೌಂಡೇಶನ್ ಅಧ್ಯಕ್ಷ ನಾಗೇಶ ತಳವಾರ ತಿಳಿಸಿದ್ದಾರೆ.