ಪ್ರಜಾಸ್ತ್ರ ಕ್ರೀಡಾ ಸುದ್ದಿ
ಐಪಿಎಲ್ ಟೂರ್ನಿಯಲ್ಲಿ ಆಡಲು ದುಬೈಗೆ ಹಾರಿದ್ದ ಸುರೇಶ ರೈನಾ ಭಾರತಕ್ಕೆ ವಾಪಸ್ ಆಗಿದ್ದಾರೆ. ಈ ಮೊದ್ಲು ಚೆನ್ನೈ ಸೂಪರ್ ಕಿಂಗ್ಸ್ ಸಿಇಒ, ಅವರ ವೈಯಕ್ತಿಕ ಕಾರಣಕ್ಕೆ ವಾಪಸ್ ಆಗ್ತಿದ್ದಾರೆ. ನಮ್ಮ ಬೆಂಬಲವಿದೆ ಎಂದಿದ್ರು. ಬಳಿಕ ಸುರೇಶ ಮಾವನವರ ಹತ್ಯೆಯ ವಿಷಯ ಗೊತ್ತಾಯ್ತು.
ಇದರ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಶ್ರೀನಿವಾಸನ್ ಅವರು, ಹೋಟೆಲ್ ಬಾಲ್ಕನಿ ವಿಚಾರಕ್ಕೆ ರೈನಾ ವಾಪಸ್ ಬಂದಿದ್ದಾರೆ. ಅವರಿಗೆ ಮುಂದಿನ ದಿನಗಳಲ್ಲಿ ಐಪಿಎಲ್ ನಲ್ಲಿಯೂ ಆಡುವುದು ಕಷ್ಟವಾಗಬಹುದು ಎಂದು ಹೇಳಿದ್ರು. ಅಲ್ಲಿಂದ ರೈನಾ ಭಾರತಕ್ಕೆ ವಾಪಸ್ ಆಗಿರುವುದಕ್ಕೆ ಟ್ವೀಸ್ಟ್ ಸಿಕ್ತು.
ಇದೀಗ ಇದಕ್ಕೆ ಪ್ರತಿಕ್ರಿಯೆ ನೀಡಿರುವ ರೈನಾ, ನಾನು ಕ್ವಾರಂಟೈನಲ್ಲಿದ್ರೂ ಅಭ್ಯಾಸ ಮಾಡ್ತಿದ್ದೆ. ಬಿಸಿಸಿಐ ಎಲ್ಲರನ್ನೂ ಚೆನ್ನಾಗಿ ನೋಡಿಕೊಂಡಿದೆ. ನನ್ಗೆ ನನ್ನ ಕುಟುಂಬ ಮುಖ್ಯ. ನನ್ಗೆ ಏನಾದ್ರೂ ಆದ್ರೆ ಕುಟುಂಬದ ಕಥೆ ಏನು ಎಂದು ಚಿಂತೆ ಮಾಡುತ್ತೇನೆ. ಧೋನಿ ಮತ್ತೆ ನನ್ನ ಮಧ್ಯೆ ಯಾವುದೇ ವಿವಾದವಿಲ್ಲ. ಸರಿಯಾದ ಕಾರಣವಿಲ್ಲದೆ ಯಾರೂ 12 ಕೋಟಿ ರೂಪಾಯಿ ಬಿಡುವುದಿಲ್ಲ. ಇಂಟರ್ ನ್ಯಾಷನಲ್ ಕ್ರಿಕೆಟ್ ಗೆ ವಿದಾಯ ಹೇಳಿರುವ ನಾನು ಇನ್ನೂ ಐದು ವರ್ಷ ಐಪಿಎಲ್ ಆಡಬಲ್ಲೆ ಎಂದಿದ್ದಾರೆ. ಇದರಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.