ಅಯ್ಯೋ ಹುಚ್ಮುಂಡೆದೆ ಎಂದು ಪ್ರತಾಪ್ ಸಿಂಹ ವಿರುದ್ಧ ಇಬ್ರಾಹಿಂ ವಾಗ್ದಾಳಿ

146

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಗುಂಬಜ್ ಮಾದರಿಯಲ್ಲಿ ಮೈಸೂರಿನಲ್ಲಿ ಬಸ್ ನಿಲ್ದಾಣ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ, ಸಂಸದ ಪ್ರತಾಪ್ ಸಿಂಹ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ. ಮೈಸೂರು ಅರಮನೆ ಇರುವುದು ಗುಂಬಜ್ ಮಾದರಿಯಲ್ಲಿ ಅದನ್ನು ಒಡೆಯಲು ಸಾಧ್ಯವೇ? ಅಯ್ಯೋ ಹುಚ್ಮುಂಡೆದೆ ಸತ್ತವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತಾಡ್ತೀಯಾ ಎಂದು ಕಿಡಿ ಕಾರಿದ್ದಾರೆ.

ಟಿಪ್ಪು ಬಗ್ಗೆ ಬ್ರಿಟಿಷರು ಕೊಂಡಾಡಿದ್ದಾರೆ. ರಾಷ್ಟ್ರಪತಿಗಳು ಹೊಗಳಿದ್ದಾರೆ. ವೋಟಿಗಾಗಿ ಚಿಲ್ಲರೆ ಮಾಡುವುದನ್ನು ನಿಲ್ಲಿಸು. ಪ್ರತಾಪ್ ಸಿಂಹ ಅಶಾಂತಿ ಸೃಷ್ಟಿಸಲು ಇಂತಹ ಹೇಳಿಕೆಗಳನ್ನು ನೀಡುತ್ತಾರೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!