ಪ್ರಜಾಸ್ತ್ರ ಸುದ್ದಿ
ಕಲಬುರಗಿ: ಪಂಚನಾಮೆ ಮಾಡುವ ಸಂದರ್ಭದಲ್ಲಿ ಕೊಲೆ ಆರೋಪಿ ಮಹಿಳಾ ಪಿಎಸ್ಐ ಮೇಲೆ ಫೈರಿಂಗ್ ನಡೆಸಿರುವ ಘಟನೆ ಶಹಬಾದ್ ನಲ್ಲಿ ನಡೆದಿದೆ. ಮಹಿಳಾ ಪಿಎಸ್ಐ ಸುವರ್ಣಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ವೇಳೆ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಕೊಲೆ ಆರೋಪಿ ವಿಜಯಕುಮಾರ್ ಹಳ್ಳಿ ಗುಂಡು ಹಾರಿಸಿದ್ದಾನೆ.
ಇತ್ತೀಚೆಗೆ ಗಿರೀಶ್ ಕಂಬಾನೂರ ಎಂಬಾತನ್ನು ತಲ್ವಾರದಿಂದ ದಾಳಿ ಮಾಡಿ ಕೊಲೆ ಮಾಡಲಾಗಿತ್ತು. ಶಹಬಾದ್ ಹತ್ತಿರದ ತೊನಸನಹಳ್ಳಿ ಹತ್ತಿರ ತಲ್ವಾರ್ ಹಾಗೂ ಬಂದೂಕು ಎಸೆದು ಹೋಗಿದ್ದಾರೆ. ಪೊಲೀಸರು ಸ್ಥಳ ಮಹಜರು ಮಾಡಲು ಹೋದಾಗ ಬಂದೂಕು ಎಸೆದಿದ್ದನ್ನು ತೋರಿಸುವ ನಾಟಕ ಮಾಡಿದ ಆರೋಪಿ ವಿಜಯಕುಮಾರ್ ಹಳ್ಳಿ ಅದೆ ಬಂದೂಕಿನಿಂದ ಪಿಎಸ್ಐ ಸುವರ್ಣಾ ಅವರ ಮೇಲೆ ಗುಂಡು ಹಾರಿಸಿದ್ದಾನೆ. ತಕ್ಷಣ ಸಿಪಿಐ ಪ್ರಕಾಶ್ ಯಾತನೂರ್ ಆರೋಪಿ ಮೇಲೆ ಗುಂಡು ಹಾರಿಸಿದ್ದಾರೆ.
ಪಿಎಸ್ಐ ಸುವರ್ಣಾ ಸ್ಥಿತಿ ಗಂಭೀರವಾಗಿದ್ದು, ತೀರ್ವನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಧ್ಯಕ್ಕೆ ಅವರ ಆರೋಗ್ಯದ ಬಗ್ಗೆ ವೈದ್ಯರು ಏನೂ ಹೇಳಿಲ್ಲವೆಂದು ಎಸ್ಪಿ ಇಶಾ ಪಂತ್ ಹೇಳಿದ್ದಾರೆ.