ಅಪಘಾತದಲ್ಲಿ ನವವರ ನಿಧನ.. ಸ್ಟ್ರೆಚರ್ ನಲ್ಲಿ ಬಂದ ಪತ್ನಿ..

177

ಪ್ರಜಾಸ್ತ್ರ ಸುದ್ದಿ

ದಾವಣಗೆರೆ: ನಿಜಕ್ಕೂ ಇದೊಂದು ದುರಂತವೆಂದೇ ಹೇಳಬಹುದು. ಮದುವೆಯಾಗಿ 15 ದಿನದೊಳಗೆ ಬೈಕ್ ಅಪಘಾತದಲ್ಲಿ ನವವರ ನಿಧನ ಹೊಂದಿದರೆ ವಧು ಗಂಭೀರವಾಗಿ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರ ಬಳಿ ನಡೆದಿದೆ.

ನವೆಂಬರ 28ರಂದು ಮದುವೆಯಾದ ದಾವಣಗೆರೆಯ ಸಂಜಯ್ ಹಾಗೂ ಗದಗ ಮೂಲದ ಪ್ರೀತಿ, ಮುರುಡೇಶ್ವರಕ್ಕೆ ಬೈಕ್ ಮೇಲೆ ಹೋಗಿದ್ದಾರೆ. ಆದರೆ, ವಿಧಿ ಅವರ ಬಾಳಲ್ಲಿ ಆಡಬಾರದ ಆಟವಾಡಿದ ಪರಿಣಾಮ 15 ದಿನದೊಳಗೆ ಮದುವೆ ಬಂಧನ ದುರಂತ ಅಂತ್ಯ ಕಂಡಿದೆ.

ವಧು ಪ್ರೀತಿ ಕೈ, ಕಾಲುಗಳಿಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆಯೂ ಪತಿಯ ಅಂತಿಮ ದರ್ಶನ ಪಡೆಯಲು ಸ್ಟ್ರೆಚರ್ ನಲ್ಲಿ ಬಂದಿದ್ದಾಳೆ. ಇಡೀ ದೃಶ್ಯವನ್ನು ನೋಡಿದ ಪ್ರತಿಯೊಬ್ಬರ ಕಣ್ಣುಗಳು ತೇವಗೊಂಡಿವೆ. ಸಂಜಯ್ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದ. ಕೆಲ ದಿನಗಳಲ್ಲಿ ನವಜೋಡಿ ಬೆಂಗಳೂರಿಗೆ ಪಯಣಿಸಬೇಕಿತ್ತು. ಆದರೆ, ಈಗ ಎಲ್ಲವೂ ಕೈಮೀರಿ ಹೋಗಿದೆ. ಎರಡು ಕಡೆ ಕುಟುಂಬಸ್ಥರು ಶೋಕಸಾಗರದಲ್ಲಿ ಮುಳುಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!