ಬ್ರೇಕಿಂಗ್ ನ್ಯೂಸ್
Search

100 ಅಭ್ಯರ್ಥಿಗಳ ಹೆಸರು ಎಂದು ನಿಖಿಲ್ ಹೆಸರು ಘೋಷಣೆ

167

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಮನಗರದಲ್ಲಿ ನಡೆಯುತ್ತಿರುವ ಶ್ರೀನಿವಾಸ್ ಕಲ್ಯಾಣೋತ್ಸವದ ಬಳಿಕ 100ಕ್ಕೂ ಹೆಚ್ಚು ಜೆಡಿಎಸ್ ಅಭ್ಯರ್ಥಿಗಳ ಹೆಸರು ಘೋಷಿಸುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದರು. ಆದರೆ, ಘೋಷಿಸಿದ್ದು ಮಾತ್ರ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಹೆಸರು ಮಾತ್ರ.

ರಾಮನಗರದ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಘೋಷಿಸಿದರು. ನಮ್ಮ ಮಾವನವರಿಗೆ, ನನ್ನ ಪತಿಗೆ ಹಾಗೂ ನನಗೆ ನೀಡಿದ ಬೆಂಬಲವನ್ನು ಮಗನಿಗೂ ನೀಡಿ ಎಂದು ಮನವಿ ಮಾಡಿದರು. ಈ ಮೂಲಕ ಮಗನಿಗೆ ತಾಯಿ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ.

ಪಂಚರತ್ನ ಯಾತ್ರೆ ಆರಂಭದಲ್ಲಿ 100 ಅಭ್ಯರ್ಥಿಗಳ ಹೆಸರು ಘೋಷಿಸುವುದಾಗಿ ಹೇಳಿದ್ದರು. ನಂತರ ಪಕ್ಷದ ಜ್ಯೋತಿಷಿ ಎಂದು ಸಹೋದರ ಮಾಜಿ ಸಚಿವ ರೇವಣ್ಣ ಹೆಸರು ಹೇಳಿದ ಕುಮಾರಸ್ವಾಮಿ, ಅವರ ಸಧ್ಯಕ್ಕೆ ಮುಹೂರ್ತ ಸರಿಯಿಲ್ಲ ಮುಂದೆ ಘೋಷಣೆ ಮಾಡೋಣ ಎಂದಿದ್ದಾರೆ ಅಂತಾ ತಿಳಿಸಿದರು. ಈಗ ಶ್ರೀನಿವಾಸ್ ಕಲ್ಯಾಣೋತ್ಸವದ ಬಳಿಕ ಘೋಷಣೆ ಎಂದಿದ್ದರು. ನೋಡಿದರ ಮಗನ ಹೆಸರು ಘೋಷಿಸಿದ್ದಾರೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!