ಪ್ರಜಾಸ್ತ್ರ ಸುದ್ದಿ
ಸಿಂದಗಿ: ವಿಧಾಸಭೆ ಉಪ ಚುನಾವಣೆಯ ಕಣ ರಂಗೇರಿದ್ದು, ಅಬ್ಬರದ ಪ್ರಚಾರ ನಡೆದಿದೆ. ದೊಡ್ಡ ದೊಡ್ಡ ಪಕ್ಷಗಳ ನಡುವೆ ಬದಲಾವಣೆಯ ಗಾಳಿ ಬೀಸಲು ಕೆಆರ್ ಎಸ್ ಪಕ್ಷದ ಅಭ್ಯರ್ಥಿ ಡಾ.ಸುನೀಲಕುಮಾರ್ ಹಬ್ಬಿ ಕಣಕ್ಕೆ ಇಳಿದಿದ್ದಾರೆ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಅಬ್ಬರದ ಪ್ರಚಾರದ ನಡುವೆ ಇವರು, ಮೊದಲ ದಿನದಿಂದಲೇ ಡೋರ್ ಟು ಡೋರ್ ಅನ್ನೋ ರೀತಿಯಲ್ಲಿ ಜನರನ್ನು ಸಂಪರ್ಕ ಮಾಡುತ್ತಿದ್ದು, ತಮಗೊಂದು ಅವಕಾಶ ಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಕೆಆರ್ ಎಸ್ ಗೆ ಒಂದು ಅವಕಾಶ ಕೊಟ್ಟರೆ ಬದಲಾವಣೆ ಮಾಡುತ್ತೇವೆ ಎನ್ನುತ್ತಿದ್ದಾರೆ.