ತೆಲುಗು ಸಿನಿ ದುನಿಯಾದ ಪವರ್ ಸ್ಟಾರ್ ಪವನ ಕಲ್ಯಾಣ ಅಭಿಮಾನಿಗಳಿಗೆ ಖುಷಿಯ ವಿಚಾರ ನೀಡಿದ್ದಾರೆ. ಅದು ಒಟ್ಟಿಗೆ ಮೂರು ಸಿನಿಮಾಗಳನ್ನ ಅನೌನ್ಸ್ ಮಾಡಿದ್ದಾರೆ. ಅಜ್ಞಾತವಾಸಿ ಚಿತ್ರದ ಬಳಿಕ ಮತ್ತೆ ಬೇರೆ ಯಾವ ಸಿನ್ಮಾ ಬಂದಿರ್ಲಿಲ್ಲ. ರಾಜಕೀಯದಲ್ಲಿ ಸಾಕಷ್ಟು ಬ್ಯುಸಿಯಾಗಿದ್ರು. ಜನ ಸೇನಾ ಪಕ್ಷದ ಮೂಲಕ ಆಂಧ್ರ ರಾಜಕೀಯದಲ್ಲಿ ಒಂದಿಷ್ಟು ಪ್ರಚಾರ ನಡೆಸಿದ್ರು. ಇದೀಗ ಮತ್ತೆ ಬಣ್ಣದ ಲೋಕಕ್ಕೆ ರೀ ಎಂಟ್ರಿಯಾಗಿದೆ.
ಹಿಂದಿಯ ಸೂಪರ್ ಹಿಟ್ ಪಿಂಕ್ ಸಿನ್ಮಾದ ತೆಲುಗಿನಲ್ಲಿ ಪವನ ಕಲ್ಯಾಣ ಕಾಣಿಸಿಕೊಳ್ತಿದ್ದಾರೆ. ಇದರ ಜೊತೆಗೆ ಕ್ರಿಷ್ ನಿರ್ದೇಶನದ ಮೂವಿ ಹಾಗೂ ಮೈತ್ರಿ ಮೂವೀಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರಂತೆ. ಹರೀಶ ಶಂಕರ ಜೊತೆ ಗಬ್ಬರ್ ಸಿಂಗ್ ಬಳಿಕ ಪವನ ಕಲ್ಯಾಣ ಮತ್ತೆ ಒಟ್ಟಿಗೆ ಕೆಲಸ ಮಾಡ್ತಿದ್ದಾರೆ.
ಗಬ್ಬರ್ ಸಿಂಗ್ ಸೂಪರ್ ಹಿಟ್ ಆಗುವ ಮೂಲಕ ಈ ಜೋಡಿ ಮೋಡಿ ಮಾಡಿತ್ತು. ಗದ್ದಲಕೊಂಡ ಗಣೇಶ ಚಿತ್ರದ ಬಳಿಕ ಹರೀಶ ಶಂಕರ್ ಯಾವುದೇ ಸಿನ್ಮಾಗೆ ಆಕ್ಷನ್ ಕಟ್ ಹೇಳಿರ್ಲಿಲ್ಲ. ಇದೀಗ ಮೈತ್ರಿ ಮೂವೀಸ್ ಅಡಿಯಲ್ಲಿ ಹೊಸ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಹೀಗೆ ಒಟ್ಟಿಗೆ ಮೂರು ಸಿನಿಮಾಗಳ ಖುಷಿಯನ್ನ ಪವನ ಕಲ್ಯಾಣ ಅವರ ಫ್ಯಾನ್ಸ್ ಗೆ ನೀಡಿದ್ದಾರೆ.