ಪ್ರಜಾಸ್ತ್ರ ಅಪರಾಧ ಸುದ್ದಿ
ಕಲಬುರಗಿ: ಬಸ್ ಅಡ್ಡಗಟ್ಟಿ ಬಾಲಕಿಯೊಬ್ಬಳ ಮೇಲೆ ಗುಂಪೊಂದು ದಾಳಿ ಮಾಡಿ ಕೊಲೆ ಮಾಡಲು ಯತ್ನಿಸಿದ ಘಟನೆ, ಅಟ್ಟೂರು ಕ್ರಾಸ್ ಹತ್ತಿರ ನಡೆದಿದೆ. ದುಷ್ಕರ್ಮಿಗಳು ಕತ್ತು ಕೊಯ್ದು ಕೊಲೆ ಮಾಡಲು ಯತ್ನಿಸಿದ ಭೀಕರ ಘಟನೆ ನಡೆದಿದೆ.
ಬೆಳಮಗಿ ಗ್ರಾಮದಿಂದ ಸಲಗರದ ಗ್ರಾಮಕ್ಕೆ ಹೊರಟಿದ್ದಾಗ ಬಸ್ ಅಡ್ಡ ಗಟ್ಟಿದ ದುಷ್ಕರ್ಮಿಗಳು ಇಂತಹ ನೀಚ ಕೃತ್ಯವೆಸಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದೆ.