ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆ ಸಂಬಂಧ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದ್ದು, ಫೆಬ್ರವರಿ 15ರೊಳಗೆ 100 ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹಿರಿಯ ನಾಯಕ ಅಲ್ಲಮ ವೀರಭದ್ರಪ್ಪ ಹೇಳಿದ್ದಾರೆ.
ಕರ್ನಾಟಕ ಅಭ್ಯರ್ಥಿ ಆಯ್ಕೆ ವಿಚಾರ ಎಐಸಿಸಿ ಡೈರೆಕ್ಷನ್ ಗೊತ್ತಿಲ್ಲ. ದೆಹಲಿಯ ಮೀಟಿಂಗ್ ನಲ್ಲಿ ಗೊತ್ತಾಗತ್ತೆ. ಸ್ಕ್ರೀನಿಂಗ್ ಕಮಿಟಿ ದೆಹಲಿಯಲ್ಲಿದೆ. ನಾನು ಚುನಾವಣಾ ಕಮಿಟಿಯಲ್ಲಿದ್ದೇನೆ. ಒಂದು ಕ್ಷೇತ್ರದಿಂದ 2-3 ಹೆಸರು ಕಳಿಸಬೇಕಾ ಅಂತಾ ತೀರ್ಮಾನ ಮಾಡ್ತೀವಿ. ಯಾವ ಅಭ್ಯರ್ಥಿ ಪಟ್ಟಿ ಫೈನಲ್ ಮಾಡಬೇಕು ಅಂತಾ ಗೊತ್ತಾಗುತ್ತೆ ಎಂದಿದ್ದಾರೆ.
ಮೊದಲ ಹಂತದಲ್ಲಿ 100 ಅಭ್ಯರ್ಥಿಗಳ ಪಟ್ಟಿಯನ್ನು ಫೆಬ್ರವರಿ 15ರೊಳಗೆ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.