ದಾವಣಗೆರೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶಾದಿ ಭಾಗ್ಯ ರದ್ದುಗೊಳಿಸುವ ಮೂಲಕ ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಅನ್ನೋದು ಸಾಬೀತು ಮಾಡಿದೆ. ಇದೇನಾ ಸಬ್ ಕಾ ಸಾತ್ ಸಬ್ ವಿಕಾಸ್ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡ್ರು.
ಸಬ್ ಕಾ ಸಾಥ್ ಅನ್ನೋದು ಎಲ್ಲರಿಗೂ ಅನ್ವಯವಾಗುತ್ತೆ. ಅದನ್ನ ಬಿಟ್ಟು ಒಂದು ಧರ್ಮವನ್ನ ಹೊರಗೆಯಿಡುವುದು ಅಲ್ಲ ಎಂದರು. ಇದಾದ್ಮೇಲೆ ಚಿಕ್ಕಮಗಳೂರಲ್ಲಿ ನಡೆದ ಸಿಎಎ ವಿರೋಧಿ ಹೋರಾಟದಲ್ಲಿ ಭಾಗವಹಿಸಿ, ನನ್ನ ಹುಟ್ಟಿದ ದಿನಾಂಕ ನನ್ಗೆ ಗೊತ್ತಿಲ್ಲ. ಇನ್ನು ನನ್ನ ತಂದೆ ತಾಯಿ ಹುಟ್ಟಿದ ದಿನಾಂಕ ಹೇಗೆ ಹೇಳಲಿ ಎಂದು ಕೇಂದ್ರದ ವಿರುದ್ಧ ಕಿಡಿ ಕಾರಿದ್ರು.