‘ಜೋಡೆತ್ತು’ ಸಿನ್ಮಾದಲ್ಲಿ ಯಾರು ಹೀರೋ?

459

ಮಂಡ್ಯ : ಲೋಕಸಭೆ ಚುನಾವಣೆ ಟೈಂನಲ್ಲಿ ಮಂಡ್ಯ ಕ್ಷೇತ್ರ ಸಾಕಷ್ಟು ಜಿದ್ದಾಜದ್ದಿನಿಂದ ಕೂಡಿತ್ತು. ಅದಕ್ಕೆ ಮತ್ತಷ್ಟು ರಂಗು ತುಂಬಿದ್ದು, ಜೋಡೆತ್ತು ಹಾಗೂ ಕಳ್ಳೆತ್ತು ಅನ್ನೋ ಟೀಕೆಗಳು. ಈ ಮಾತುಗಳನ್ನೇ ಸಿನ್ಮಾಗೆ ಟೈಟಲ್ ಮಾಡಿಕೊಂಡು ಸ್ಯಾಂಡಲ್ ವುಡ್ ನಲ್ಲಿ ಚಿತ್ರ ಬರಲು ಶುರುವಾಗಿವೆ.

ಜೋಡೆತ್ತು ಹಾಗೂ ಕಳ್ಳೆತ್ತು, ಎಲ್ಲಿದಿಯಪ್ಪಾ ಅನ್ನೋ ಹೆಸರಿನ ಚಿತ್ರ ತಯಾರಿಸಲು ನಿರ್ಮಾಪಕರು ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಸಾಲಾಗಟ್ಟು ನಿಂತಿದ್ದಾರೆ. ಇದರ ನಡುವೆ ನಟ ರಾಕಿಂಗ್ ಸ್ಟಾರ್ ಯಶ್, ಜೋಡೆತ್ತು ಟೈಟಲ್ ನ ಚಿತ್ರದಲ್ಲಿ ಆ್ಯಕ್ಟ್ ಮಾಡಲ್ಲ ಅಂತಾ ಕೊಟ್ಟಿದ್ದಾರೆ.

ನಟ ಯಶ್

ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಕೆರೆಮೇಗಳದೊಡ್ಡಿ ಗ್ರಾಮದಲ್ಲಿ ಅಭಿಮಾನಿಯೊಬ್ಬರ ಗೃಹಪ್ರವೇಶಕ್ಕೆ ನಟ ಯಶ್ ಆಗಮಿಸಿದ್ದರು. ಸುಮಲತಾ ಪರ ನಾವು ಪ್ರಚಾರ ಮಾಡಿದ್ದೇವೆ. ಚುನಾವಣೆ ಮುಗಿದ ಮೇಲೆ ನಾವು ಈ ಕಡೆ ತಲೆ ಹಾಕಿಲ್ಲ ಅನ್ನೋ ಆರೋಪ ಸುಳ್ಳು. ಇಷ್ಟಕ್ಕೂ ನಾವೇನೂ ಅಭ್ಯರ್ಥಿಯಲ್ಲ ಅಂತಾ ನಟ ಯಶ್ ಹೇಳಿದ್ದಾರೆ. ಇನ್ನೊಂದು ಕಡೆ ಜೋಡೆತ್ತು ಸಿನ್ಮಾದಲ್ಲಿ ‘ಯಜಮಾನ’ ನಟಿಸಲಿದ್ದಾರೆ ಅಂತಾ ಹೇಳಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!