ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ನಗರದ ಕೇಂದ್ರ ಬಸ್ ನಿಲ್ದಾಣದಿಂದ ಬಸ್ ಗಳು ನಿಧಾನವಾಗಿ ರಸ್ತೆಗೆ ಇಳಿಯುತ್ತಿವೆ. ಇದಕ್ಕಾಗಿ ಜಿಲ್ಲಾಡಳಿತದಿಂದ ಹಿರಿಯ ಅಧಿಕಾರಿಗಳಿಗೆ ಫೀಲ್ಡಿಗೆ ಇಳಿದಿದ್ದಾರೆ. ಹೀಗಾಗಿ ಕೆಲವೊಂದಿಷ್ಟು ಬಸ್ ಗಳು ಸಂಚಾರ ಶುರು ಮಾಡಿವೆ.
ಎನ್ ಡಬ್ಲು ಕೆಸ್ಆರ್ ಟಿಸಿ ಬಸ್ ಗಳು ಸಂಚಾರ ಪ್ರಾರಂಭಿಸ್ತಿವೆ. ಬಸ್ ನಿಲ್ದಾಣದಲ್ಲಿ ಪೊಲೀಸ್ ಭದ್ರತೆ ನೀಡಲಾಗಿದ್ದು, ಮುಷ್ಕರ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ಕೆಲವರು ಪ್ರವಾಸಿ ಮಂದಿರದತ್ತ ತೆರಳಿದ್ರೆ ಮತ್ತೆ ಕೆಲವರು ಕರ್ತವ್ಯ ಹಾಜರಾಗುತ್ತಿದ್ದಾರೆ. ಇದು ಬರೀ ಬೆಳಗಾವಿ ಅಲ್ಲ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಸ್ ಸಂಚಾರ ಪ್ರಾರಂಭವಾಗ್ತಿವೆ.