ಬಾವಿಯಲ್ಲಿ ಕಾಲು ಜಾರಿ ಬಿದ್ದ ಮಗು, ತಾಯಿ: ಆಲಮೇಲದಲ್ಲಿ ದುರಂತ ಘಟನೆ

531

ಆಲಮೇಲ: ಬಾವಿಯಲ್ಲಿ ಕಾಲು ಜಾರಿ ಬಿದ್ದು ತಾಯಿ, ಮಗು ಸಾವನ್ನಪ್ಪಿದ್ದ ಘಟನೆ ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ಆಸಂಗಿಹಾಳ ಗ್ರಾಮದ ಹೊರವಲಯದಲ್ಲಿ ನಡೆದಿದೆ.

30 ವರ್ಷದ ಕವಿತಾ ವಿಠ್ಠಲ ಘತ್ತರಗಿ (ಜಮಾದಾರ) ಹಾಗೂ 5 ವರ್ಷದ ಅಮೃತಾ ಘತ್ತರಗಿ ಸಾವನ್ನಪ್ಪಿದ ತಾಯಿ, ಮಗುವಾಗಿದ್ದಾರೆ. ಸುಮಾರು ವರ್ಷದಿಂದ ಇವರು ತೋಟದ ವಸ್ತಿಯಲ್ಲಿ ಕೆಲಸವನ್ನ ಮಾಡುತ್ತಿದ್ದರು. ನಂತರ ಅಲ್ಲಿಯೇ ಖಾಯಂ ಆಗಿ ಉಳಿದ್ದರು.

ಬಟ್ಟೆ ತೊಳೆಯುವಾಗ ಮಗು ಬಿದ್ದಿದೆ. ಮಗುವನ್ನ ಉಳಿಸಲು ಹೋದ ತಾಯಿ ಸಹ ಸಾವನ್ನಪ್ಪಿದ್ದಾರೆ. ಮೇಲ್ನೋಟಕ್ಕೆ ಇದು ಆಕಸ್ಮಿಕ ಸಾವು ಎಂದು ತಿಳಿದು ಬಂದಿದೆ. ಕೆಲವರು ಇದು ಆತ್ಮಹತ್ಯೆ ಅನ್ನೋ ಮಾತುಗಳು ಸಹ ಕೇಳಿ ಬರ್ತಿದ್ದು, ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ. ಆಲಮೇಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!